ಸಾಹಿತ್ಯ ಲೋಕ

ಶೀರ್ಷಿಕೆ - ಹಸಿರೇ ನಮಗುಸಿರು

ಸ್ವಚ್ಚವಾಗಿತ್ತು ಕಡಲ ಒಡಲು
ಇರುವಾಗ ಶುದ್ಧ ಗಾಳಿ, ಬಿಸಿಲು
ಕಡಿದೆ ಮರಗಳ ಕಟ್ಟಡಗೊಳಿಸಲು
ಪ್ರಕೃತಿಯೇ ಬಂದಿದೆ ಮನೆಗೀಗ ಪ್ರಶ್ನೆ ಕೇಳಲು..!!

ಕೊರಗುತಿದೆ ಕಡಲಿಂದು
ಧರೆಯ ಸಂಕಟ ನೆನೆ ನೆನೆದು
ಮರಗಳ ನಾಶದ ಪ್ರತಿಫಲವಿದು 
ಕರಗದೇ ಹೃದಯ ನಿನಗೆಂದೂ..? |

ಸ್ವಚ್ಚ ಪರಿಸರವೇ ಭೂಮಿಗೆ ಆಸ್ತಿಯು 
ಇದ ಬೆಳೆಸುವುದೇ ನಿಜ ಭಕ್ತಿಯು 
ಪರಿಸರವೇ ನಮ್ಮುಸಿರಿಗೆ ಶಕ್ತಿಯು 
ತುಂಬಲಿ ಇಳೆಯ ರಕ್ಷಿಸುವ ಆಸಕ್ತಿಯು..!!

ಇನ್ನಾದರೂ ನೋಡು ಕಡಲ ಅಳಲನ್ನು 
ಆಲಿಸು ಕಡಲೊಡಲ ಮನವಿಯನ್ನು 
ತಿಳಿವೆ ಮನುಜನೇ ಇದಕೆ ಕಾರಣವೆಂಬ ನಿಜವನ್ನು
ತಿಳಿದು ರಕ್ಷಿಸು ಧರೆಯ ಸೊಬಗನ್ನು..!!

-✍🏻 ಯಶಸ್ವಿ ಗಣೇಶ್ ಸೋಮವಾರಪೇಟೆ

ಕಾಮೆಂಟ್ ಬಿಡಿ

Join Us