ದೇಶ

ಗೃಹ ಸಚಿವರು ಸೂಪರ್ ಸಿಎಂ ರೀತಿ ವರ್ತಿಸುವುದು ಬೇಡ :ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ

ನವದೆಹಲಿ: ಆರ್ ಎಸ್ ಎಸ್ ಟೀಕಿಸುವ ಬದಲು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಡ್ರಗ್ಸ್, ಭಯೋತ್ಪಾದನೆ ನಿರ್ಮೂಲನೆ, ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಗಮನ ಹರಿಸಲಿ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

ದೆಹಲಿಯಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಆರ್‌ಎಸ್‌ಎಸ್‌, ಪಾಕಿಸ್ತಾನಕ್ಕೆ ಜೈ ಎನ್ನುವ ಸಂಸ್ಥೆಯಲ್ಲ. ಇದನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ ಎನ್ನುವುದು ನನ್ನ ಭಾವನೆ. ಆರ್‌ಎಸ್‌ಎಸ್ ಕರ್ನಾಟಕ, ಭಾರತದಲ್ಲಿ ಮಾತ್ರ ಇಲ್ಲ. ಜಗತ್ತಿನ ಐವತ್ತು ದೇಶಗಳಲ್ಲಿ ಅದರ ಶಾಖೆಗಳಿವೆ ಎಂದರು.

ಆರ್‌ಎಸ್‌ಎಸ್‌ ನೋಂದಣಿ ಬಗ್ಗೆ ಸಂಘದ ಹಿರಿಯರು ಮಾತನಾಡಿದ್ದಾರೆ. ಅದಕ್ಕೆ ನಾವು ಉತ್ತರ ಕೊಡುವ ಅಗತ್ಯ ಇಲ್ಲ, ಸಂಘವೇ ಅದಕ್ಕೆ ಉತ್ತರ ನೀಡುತ್ತದೆ. ಈ ಹಿಂದೆ ಸಂಘವನ್ನು ನೆಹರು ಅವರು ಬ್ಯಾನ್ ಮಾಡಿದ್ದರು. ಆ ಬಳಿಕ ಗಣರಾಜೋತ್ಸವದ ಪರೇಡ್ ನಲ್ಲಿ ಭಾಗಿಯಾಗಲು ಮನವಿ ಮಾಡಿದರು. ಇಂದಿರಾ ಗಾಂಧಿಯವರು ಬ್ಯಾನ್ ಮಾಡಲು ಪ್ರಯತ್ನ ಪಟ್ಟರು, ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಬೇಕಾದಷ್ಟು ಸಮಸ್ಯೆಗಳಿವೆ, ಗೃಹ ಸಚಿವರು ಆಕಡೆ ಗಮನ ಹರಿಸಲಿ, ಅದನ್ನು ಬಿಟ್ಟು ಸೂಪರ್ ಸಿಎಂ ರೀತಿ ವರ್ತಿಸುವುದು ಬೇಡ ಎಂದು ಶ್ರೀನಿವಾಸ ಪೂಜಾರಿ ಸಲಹೆ ನೀಡಿದ್ದಾರೆ.

ಕಾಮೆಂಟ್ ಬಿಡಿ

Join Us