ಬಿಜೆಪಿಯ ಬಾಕಿ ಉಳಿಸಿಕೊಂಡಿದ್ದ 10 ಜಿಲ್ಲಾಧ್ಯಕ್ಷರ ನೇಮಕ:ನೂತನ ಜಿಲ್ಲಾಧ್ಯಕ್ಷ ಪಟ್ಟಿ
ಉಡುಪಿ: ರಾಜಕೀಯ ಮುಸುಕಿನ ಗುದ್ದಾಟದಿಂದ ಬಾಕಿ ಉಳಿದಿದ್ದ ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕವಾಗಿದೆ. ಬಾಕಿ ಉಳಿಸಿಕೊಂಡಿದ್ದ 10 ಜಿಲ್ಲಾ ಘಟಕಗಳಿಗೆ ಅಧ್ಯಕ್ಷರನ್ನ ನೇಮಕ ಮಾಡಿ ಕರ್ನಾಟಕ ಬಿಜೆಪಿ ಆದೇಶ ಹೊರಡಿಸಿದೆ. ಅದರಲ್ಲೂ ಮುಖ್ಯವಾಗಿ ಕಗ್ಗಂಟಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಹುದ್ದೆಯನ್ನು ಬೇರೆಯವರಿಗೆ ನೀಡಲಾಗಿದೆ. ನೂತನ ಜಿಲ್ಲಾಧ್ಯಕ್ಷ ಪಟ್ಟಿ ಈ ಕೆಳಗಿನಂತಿದೆ.
- ಮೈಸೂರು ಗ್ರಾಮಾಂತರ – ಕೆಎನ್ ಸುಬ್ಬಣ್ಣ.
- ಹಾಸನ – ಸಿದ್ದೇಶ್ ನಾಗೇಂದ್ರ.
- ಕೊಡಗು – ರವಿ ಕಾಳಪ್ಪ
- ಉಡುಪಿ – ಕುತ್ಯಾರು ನವೀನ್ ಶೆಟ್ಟಿ
- ದಾವಣಗೆರೆ – ಎನ್ ರಾಜಶೇಖರ
- ಹಾವೇರಿ – ವಿರೂಪಾಕ್ಷಪ್ಪ ಬಳ್ಳಾರಿ
- ಚಿತ್ರದುರ್ಗ – ಕೆ.ಟಿ. ಕುಮಾರಸ್ವಾಮಿ
- ತುಮಕೂರು – ಎಚ್.ಎಸ್. ರವಿಕುಮಾರ್ (ಹೆಬ್ಬಾಕ)
- ಮಧುಗಿರಿ – ಚಿದಾನಂದ ಗೌಡ
- ಚಿಕ್ಕಬಳ್ಳಾಪುರ – ಎಸ್.ವಿ. ರಾಮಚಂದ್ರ ಗೌಡ (ಸೀಕಲ್)
ಜನವರಿಯಲ್ಲಿ 23 ಜಿಲ್ಲೆಗಳಿಗೆ ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕ ಮಾಡಲಾಗಿತ್ತು. ಆದ್ರೆ, ಕೆಲ ಗೊಂದಲ, ಆಂತರಿಕ ಕಚ್ಚಾಟದಿಂದ 10 ಜಿಲ್ಲಾ ಘಟಕಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿರಲಿಲ್ಲ. ಇದೀಗ ಬಾಕಿ ಇದ್ದ ಜಿಲ್ಲಾಧ್ಯಕ್ಷರನ್ನು ಸಹ ನೇಮಿಸಲಾಗಿದೆ.
ಕಾಮೆಂಟ್ ಬಿಡಿ