ಜಿಲ್ಲಾ ಸುದ್ದಿಗಳು

ಕರಾವಳಿಗೆ ಯೆಲ್ಲೋ ಅಲರ್ಟ್​ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದೆ

ಬೆಂಗಳೂರು: ಇಂದಿನಿಂದ ಕರ್ನಾಟಕದಾದ್ಯಂತ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದ್ದು, ಕರಾವಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದೆ. ಬೆಳಗಾವಿ, ಬೀದರ್, ಧಾರವಾಡ, ಕಲಬುರಗಿ, ಹಾವೇರಿ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗದಲ್ಲಿ ಕೂಡ ಮಳೆಯಾಗಲಿದೆ. ಉತ್ತರ ಒಳನಾಡಿನ ಕೆಲವೆಡೆ ಒಣಹವೆ ಮುಂದುವರೆಯಲಿದೆ.
ವಿರಾಜಪೇಟೆ, ಕೊಟ್ಟಿಗೆಹಾರ, ಆಗುಂಬೆ, ಪುತ್ತೂರು, ಸುಳ್ಯ, ಅಂಕೋಲಾ, ಮಂಗಳೂರು, ಪೊನ್ನಂಪೇಟೆ, ಕಮ್ಮರಡಿ, ಭಾಗಮಂಡಲ, ಕಾರ್ಕಳ, ಪಣಂಬೂರು, ಗೇರುಸೊಪ್ಪ, ಕದ್ರಾ, ಉಡುಪಿ, ನಾಪೋಕ್ಲು, ಸಿದ್ದಾಪುರ, ಕಾರವಾರ, ಧರ್ಮಸ್ಥಳ, ಮಂಕಿ, ಬೆಳ್ತಂಗಡಿ, ಉಪ್ಪಿನಂಗಡಿ, ಎನ್​ಆರ್​ಪುರ, ಹುಂಚದಕಟ್ಟೆ, ಜಯಪುರ, ಹೊನ್ನಾಳಿ, ತ್ಯಾಗರ್ತಿ, ಸೋಮವಾರಪೇಟೆ, ಬನವಾಸಿ, ಮಾಣಿ, ಮುಲ್ಕಿ, ಕ್ಯಾಸಲ್​ರಾಕ್​ನಲ್ಲಿ ಮಳೆಯಾಗಿದೆ.

ಕಾಮೆಂಟ್ ಬಿಡಿ

Join Us