ಕೃಷಿ

ತೆಂಗು ರೈತರಲ್ಲಿ ಡಬಲ್ ಖುಷಿಗೆ ಕಾರಣವಾಗಿದೆ

ತುಮಕೂರು:ರಾಜ್ಯದಲ್ಲಿ ತೆಂಗು ಮತ್ತು ಕೊಬ್ಬರಿಯ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದೆ. ಇದು ತೆಂಗು ಬೆಳೆಗಾರರಲ್ಲಿ ಖುಷಿ ಮೂಡಿಸಿದೆ. ಸದಾ ತೆಂಗು ಬೆಲೆಯ ಕುಸಿತದಿಂದ ಕಂಗಲಾಗಿದ್ದ ಬಯಲು ಸೀಮೆಯ ರೈತರು ಅಪರೂಪಕ್ಕೆ ಬೆಲೆ ಏರಿಕೆಯಿಂದ ಖುಷಿಯಾಗಿದ್ದಾರೆ. ತೆಂಗು ಬೆಲೆಯ ಜೊತೆಗೆ ಕೊಬ್ಬರಿ ಬೆಲೆ ಕೂಡ ಏರಿಕೆ ಆಗಿರುವುದು ತೆಂಗು ರೈತರಲ್ಲಿ ಡಬಲ್ ಖುಷಿಗೆ ಕಾರಣವಾಗಿದೆ.

ಈಗ ತೆಂಗು ರೈತರ ಸರದಿ. ತೆಂಗು ಮತ್ತು ಕೊಬ್ಬರಿ ಬೆಲೆ ಏರಿಕೆಯಾಗುತ್ತಿದೆ. ಕೊಬ್ಬರಿ ಬೆಲೆ ಏರಿಕೆಯಿಂದ ಕೊಬ್ಬರಿ ಎಣ್ಣೆಯ ಬೆಲೆಯೂ ಏರುಮುಖವಾಗಿದೆ. ತೆಂಗು ಅನ್ನು ಕಲ್ಪವೃಕ್ಷ ಎಂದು ಕರೆಯುತ್ತೇವೆ. ತೆಂಗಿನ ಎಲ್ಲ ಉತ್ಪನ್ನಗಳು ಒಂದಲ್ಲ, ಒಂದು ರೀತಿಯಲ್ಲಿ ಜನಕ್ಕೆ ಉಪಯೋಗಿ ಆಗಿವೆ. ತೆಂಗಿನ ಖಾಲಿ ಚಿಪ್ಪಿಗೂ ಟನ್‌ಗೆ 34 ಸಾವಿರ ರೂಪಾಯಿ ಬೆಲೆ ಇದೆ. ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಕೆ.ಬಿ.ಕ್ರಾಸ್ ನಲ್ಲಿ ತೆಂಗಿನ ಖಾಲಿ ಚಿಪ್ಪು 34 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದೆ.

ಇನ್ನೂ ತಿಪಟೂರು ಪಕ್ಕದ ಚಿಕ್ಕನಾಯಕನಹಳ್ಳಿಯಲ್ಲಿ ರವಿ ಎಂಬ ರೈತರು ತೆಂಗಿನ ಚಿಪ್ಪು ಅನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಿ ವಿದೇಶಕ್ಕೆ ರಫ್ತು ಕೂಡ ಮಾಡುತ್ತಿದ್ದಾರೆ. ಆನ್ ಲೈನ್ ವೇದಿಕೆಗಳಲ್ಲಿ ತೆಂಗಿನ ಕಾಯಿಯ ಖಾಲಿ ಚಿಪ್ಪು ಕೂಡ ಕೆಲವೊಮ್ಮೆ 100 ರೂಪಾಯಿ, 200 ರೂಪಾಯಿಗೆ ಮಾರಾಟವಾದ ಉದಾಹರಣೆಯೂ ಇದೆ. ಏನೂ ಸಿಗಲಿಲ್ಲ ಅಂದರೇ, ಚಿಕ್ಕನಾಯಕನಹಳ್ಳಿ ಚಿಪ್ಪು ಸಿಗುತ್ತೆ ಅಂತ ವ್ಯಂಗ್ಯವಾಗಿ ಜನರು ಹೇಳುತ್ತಿದ್ದರು. ಆದರೇ, ಅದೇ ಚಿಕ್ಕನಾಯಕನಹಳ್ಳಿ ಚಿಪ್ಪು ಕೂಡ ಟನ್ ಗೆ 34 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದ್ದು, ಎಲ್ಲರೂ ಹುಬ್ಬೇರುವಂತೆ ಮಾಡಿದೆ. ಇನ್ನೂ, ಜೂನ್​ 27ರಂದು ಅರಸಿಕೇರೆಯಲ್ಲಿ ಕ್ವಿಂಟಾಲ್​ಗೆ 30 ಸಾವಿರಕ್ಕೆ ಮಾರಾಟವಾಗಿದೆ.

ಕಾಮೆಂಟ್ ಬಿಡಿ

Join Us